ಸಾವಯವ ಕೃಷಿ ಮತ್ತು ಸಮಾಜ

ಇತ್ತೀಚಿನ ದಿನಗಳಲ್ಲಿ ಸಾವಯವ ಕೃಷಿಗೆ ಸಿಗುತ್ತಿರುವ ಮಾನ್ಯತೆ ಮತ್ತು ಈ‌ ಬಗೆಯ ಕೃಷಿಯಲ್ಲಿ ಹಲವು ರೈತರು ಕಾಣುತ್ತಿರುವ ಯಶೋಗಾಥೆಗಳು ಕನ್ನಡ ದೈನಂದಿಕಗಳಲ್ಲಿ ನಾವು ಪ್ರತಿನಿತ್ಯ ಕಾಣುತ್ತಿದ್ದೇವೆ. ರಾಸಯನಿಕರಹಿತ ಕೃಷಿ ಉತ್ಪನ್ನಗಳು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಮತ್ತು ಪರಿಸರಸ್ನೇಹಿಯೂ‌ ಕೂಡ ಎಂಬುದರಲ್ಲಿ ಹೆಚ್ಚಿನ ಸಂದೇಹಗಳೇನು ಉಳಿದಿಲ್ಲ. ಆದರೆ ನಮ್ಮ ಜನಸಂಖ್ಯೆಯು ಬೆಳೆಯುತ್ತಿರುವ ವೇಗದಲ್ಲಿಯೇ ಈ‌ ವಿಧಾನಗಳಿಂದ ಇಳುವರಿಯೂ ಹೆಚ್ಚಬಲ್ಲದೇ?‌ ಈ‌ ವಿಧಾನಗಳ ಅಭ್ಯಾಸ ಮತ್ತು ಇವುಗಳಿಗೆ ಬೇಕಾಗಿರುವ ಅಧಿಕ ಉಸ್ತುವಾರಿಯ ಕಲೆಗಳನ್ನು ನಮ್ಮ ರೈತರು ವ್ಯಾಪಕವಾಗಿ ಅಳವಡಿಸಿಕೊಳ್ಳಬಲ್ಲರೇ ಮತ್ತು ಅತೀ ಮುಖ್ಯವಾಗಿ, ರೈತರ ಇಂದಿನ ದುಃಸ್ಥಿತಿಗೆ ಈ‌ ಪದ್ಧತಿಯಿಂದ ಏನಾದರೂ‌ ಒಳಿತಾಗಬಲ್ಲದೇ ಎಂಬ ಪ್ರಶ್ನೆಗಳಿಗೆ ತಕ್ಷಣದ ಉತ್ತರಗಳು ಬೇಕಿವೆ.  read more »

ಅಭಿವೃದ್ಧಿ ಮತ್ತು ಜೀವನೋಪಾಯ ಸಂರಕ್ಷಣೆ

ಅಭಿವೃದ್ಧಿ, ಪ್ರಗತಿ, ಬೆಳವಣಿಗೆ... ಇವೆಲ್ಲವೂ ಸ್ವಾತಂತ್ರ್ಯದ ನಂತರ ನಾವು ಬಳಸುತ್ತಾ ಬಂದಿರುವ ಬೀಜಮಂತ್ರಗಳು. ಬಹಳವಾಗಿ ಬಳಕೆಯಲ್ಲಿದ್ದರೂ, ಉಪಯೋಗಿಸಿವಾಗ ಇವುಗಳ ಪೂರ್ಣವಾದ ಅರ್ಥವನ್ನು ಗ್ರಹಿಸದೇ ಅರ್ಥವನ್ನು ಸಂಕುಚಿತವಾಗಿ ನೋಡುವುದೇ ಹೆಚ್ಚು. ಅಭಿವೃದ್ಧಿ ಎನ್ನುವುದನ್ನು ಕೇವಲ ಆರ್ಥಿಕ ಬೆಳವಣಿಗೆ, ಮೂಲಭೂತ ಸೌಕರ್ಯಗಳ ಬೇಡಿಕೆ ಮತ್ತು ಈ ಎರಡು ವಿಷಯಗಳಲ್ಲಿ ಸರ್ಕಾರ ಅಥವ ರಾಜಕೀಯ ನಾಯಕರು ನಿರ್ಧರಿಸುವ ಗುರಿಗಳನ್ನು ಮುಟ್ಟಲು ಬೇಕಾಗಿರುವ ಸೌಕರ್ಯಗಳನ್ನು ಒದಗಿಸುವ ಪರಿಕ್ರಿಯೆ ಎಂದೇ ಅರ್ಥೈಸಲಾಗಿದೆ. ನಮ್ಮಲ್ಲಿರುವ ಸಾಮಾಜಿಕ ಮತ್ತು ನೈಸರ್ಗಿಕ ಸಂಪತ್ತು ಈ ಮಟ್ಟದ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾದೀತೆ ಅಥವ ಸಧ್ಯಕ್ಕೆ ಇವುಗಳ ಪೂರೈಕೆ ಆಗುತ್ತಿದ್ದರೂ ಮುಂದೆಯೂ ಕೂಡ ಇದೇ ಮಟ್ಟದ ಪೂರೈಕೆ ಸಾಧ್ಯವೇ ಎಂಬುದರ ಬಗ್ಗೆ ಸಾಕಷ್ಟು ಚಿಂತನೆ ನಮ್ಮಲ್ಲಿ ಆಗುತ್ತಿಲ್ಲ.  read more »

ರೈತರ ಆತ್ಮಹತ್ಯೆ: ಇದುವರೆಗಿನ ಸಂಶೋಧನೆ

ರೈತರ ಆತ್ಮಹತ್ಯೆಗಳು ಕರ್ನಾಟಕವಲ್ಲದೇ ಭಾರತದ ಹಲವು ರಾಜ್ಯಗಳನ್ನು ಕಾಡುತ್ತಿವೆ. ಒಂದು ಅಧ್ಯಯನದ ಪ್ರಕಾರ ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ೩೦೦೦೦ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರು, ವಾರ್ತಾಪತ್ರಿಕೆಗಳು, ರಾಜಕಾರಣಿಗಳು, ಸಂಶೋಧಕರು, ಬುದ್ಧಿಜೀವಿಗಳು ಹೀಗೆ ಎಲ್ಲರೂ ರೈತರೇಕೆ ತಮ್ಮ ಪ್ರಾಣವನ್ನೇ ತೆಗೆದುಕೊಳ್ಳುತ್ತಿದ್ದಾರೆ ಎಂಬುದಕ್ಕೆ ತಮ್ಮದೇ ಆದ ಕಾರಣಗಳನ್ನು ಕೊಟ್ಟಿದ್ದಾರೆ. ಈ ವಿಷಯವಾಗಿ ಹಲವಾರು ಚರ್ಚೆಗಳು, ವಿಚಾರಗೋಷ್ಠಿಗಳು ನಡೆದು, ಹಲವು ರಾಜ್ಯಗಳ ಸರ್ಕಾರಗಳು ಪರಿಹಾರಧನ, ಸಹಾಯಧನವನ್ನು ಘೋಷಿಸಿಯೂ ಆಗಿದೆ. ಆದರೂ ರೈತರ ಆತ್ಮಹತ್ಯೆಗಳು ಕೇಳಿಬರುತ್ತಲೇ ಇವೆ. ರೈತ ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡ, ಸಮಸ್ಯೆಯ ಪರಿಹಾರಕ್ಕೆ ಇಷ್ಟು ಮಾಡಿದರೆ ಸಾಕು ಎನ್ನುವಷ್ಟು ಖಡಾಖಂಡಿತವಾಗಿ ಹೇಳವಷ್ಟು ಸರಳ ಸಮಸ್ಯೆ ಇದಲ್ಲವೆಂದು ಹಲವು ಅಧ್ಯಯನಗಳು ತೋರಿಸಿವೆ.  read more »

ಎಲ್ಲಿದೆ ಗೋಮಾಳ!!??

ಭಾರತಾದ್ಯಂತ ನಗರೀಕರಣವು ಭರದಿಂದ ಸಾಗಿದೆ.ಎಲ್ಲೆಲ್ಲಿ ನೋಡಿದರೂ ಹೊಸ ಹೊಸ ನಿವೇಶನಗಳು, ಮಳಿಗೆ ಕಾಂಪ್ಲೆಕ್ಸುಗಳು, ಮಾಲ್‍ಗಳು... ಇವುಗಳಿಂದ ದೇಶದ ಗ್ರಾಮೀಣ ಪ್ರದೇಶಗಳ ಮೇಲಾಗುತ್ತಿರುವ ಪರಿಣಾಮಗಳೇನು ಎಂಬುದನ್ನು ಊಹಿಸುವುದಕ್ಕೂ ಕಷ್ಟವಾಗುವಷ್ಟು ಕ್ಲಿಷ್ಟಕರವಾಗುತ್ತಿದೆ. ದೊಡ್ಡ ದೊಡ್ಡ ನಗರಗಳ ಸುತ್ತಮುತ್ತಲಿನ ಕೃಷಿ ಪ್ರದೇಶಗಳು ನೀವೇಶನಗಳಾಗಲು ಸಜ್ಜಾಗಿ ಬೇಸಾಯ ಕಾಣದೇ, ಬೀಳಾಗಿ ನಿಂತಿವೆ. ಬೇಸಾಯಕ್ಕೊಳಪಟ್ಟಿರುವ ಕೃಷಿ ಪ್ರದೇಶಗಳು ಆಹಾರಧಾನ್ಯಗಳನ್ನು ಬದಿಗೊತ್ತಿ ನಗರಪ್ರದೇಶಕ್ಕೆ ಬೇಕಾದ ಹಣ್ಣು-ತರಕಾರಿ ಮತ್ತಿತರ ವಾಣಿಜ್ಯ ಬೆಳೆಗಳನ್ನು ಆಹ್ವಾನಿಸಿವೆ; ಮಾರುಕಟ್ಟೆಯ ಏರಿಳಿತದ ಬಿಸಿಯನ್ನು ರೈತರ ಮನೆಯ ಬಾಗಿಲಿಗೇ ತಂದಿವೆ.  read more »

ಸಮುದಾಯ ಮತ್ತು ಕೃಷಿ

ಭಾರತದ ಗ್ರಾಮೀಣಾಭಿವೃದ್ಧಿಯ ಇಂದಿನ ಘಟ್ಟದಲ್ಲಿ 'ಸಮುದಾಯ'ಕ್ಕೆ ವಿಶೇಷ ಮಹತ್ವ ಸಿಕ್ಕಿದೆ. ಗ್ರಾಮಪಂಚಾಯತ್‍ಗಳ ಚಟುವಟಿಕೆಗಳಲ್ಲಿ ಮತ್ತು ಎನ್.ಜಿ.ಓ ಮತ್ತಿತರ ಅಭಿವೃದ್ಧಿ ಸಂಸ್ಥೆಗಳಲ್ಲಿ 'ಸಮುದಾಯಾಧಾರಿತ' ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಒತ್ತು ಸಿಗುತ್ತಿರುವುದು, ಹೆಚ್ಚಿನ ಯೋಜನೆಗಳೆಲ್ಲವೂ ಸಮುದಾಯಾಧಾರಿತವಾಗಿರುವುದನ್ನು ಓದುಗರು ನೋಡಿರಬಹುದು. ಬಹಳಷ್ಟು ಯೋಜನೆಗಳು ಹೀಗೆ ಸಮುದಾಯದ ಮಂತ್ರವನ್ನು ಏಕೆ ಹಿಡಿಯುತ್ತಿವೆ ಎಂಬುದನ್ನು ಯೋಚಿಸಬೇಕಾಗುತ್ತದೆ. ಸಣ್ಣದೊಂದು ಸಮಾಜದ ಸಮಗ್ರ ಒಳಿತನ್ನು ಒಬ್ಬ ನಾಯಕ ಅಥವ ಒಂದು ಸಣ್ಣ ಗುಂಪು ಯಶಸ್ವಿಯಾಗಿ, ಸುಸ್ಥಿರವಾಗಿ ಕಾಯ್ದುಕೊಳ್ಳಲಾಗುವುದಿಲ್ಲ ಎಂಬುದನ್ನು ಹಲವು ಉದಾಹರಣೆಗಳಲ್ಲಿ ನಾವು ನೋಡಿದ್ದೇವೆ.  read more »

ಕೆರೆಗಳ ಕಾಯಕಲ್ಪ

ಕೃಷಿ ಜೀವನದ ಅತೀ ಮುಖ್ಯ ಭಾಗ ನೀರಾವರಿ. ರೈತರಿಗೆ ನೀರಾವರಿಯ ಪ್ರಾಮುಖ್ಯತೆಯ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಅನಾದಿಕಾಲದಿಂದ ಗ್ರಾಮೀಣ ಕರ್ನಾಟಕದ ಬೆನ್ನುಲುಬಾಗಿರುವುದು ಇಲ್ಲಿರುವ ಅಸಂಖ್ಯಾತ ಕೆರೆ ಹೊಳ್ಳಗಳು. ಯಾವುದೇ ಹಳ್ಳಿಗೆ ಬೇಕಾದರೂ ಹೋಗಿ, ಸುತ್ತಮುತ್ತಲಿನಲ್ಲಿ ಒಂದಾದರೂ ಕೆರೆಯನ್ನು ಕಾಣಬಹುದು. ಇಂದು ಈ ಕೆರೆಗಳು ಸದ್ದಿಲ್ಲದೇ ಕ್ಷಿಪ್ರಗತಿಯಲ್ಲಿ ಅವನತಿಯ ಹಾದಿಯಲ್ಲಿ ಸಾಗಿರುವುದು ಆತಂಕಕಾರಿ ಬೆಳವಣಿಗೆ.  read more »

ವಿಶೇಷ ಆರ್ಥಿಕ ವಲಯಗಳು

ಪಶ್ಚಿಮ ಬಂಗಾಳದ ಸಿಂಗೂರು ಮತ್ತು ನಂದೀಗ್ರಾಮದ ದುರಂತಗಳಿಂದ 'Special Economic Zones' (SEZ) ಅಥವ 'ವಿಶೇಷ ಆರ್ಥಿಕ ವಲಯಗಳು' ಇತ್ತೀಚಿನ ದಿನಗಳಲ್ಲಿ ಕುಖ್ಯಾತವಾಗಿವೆ. ಇವುಗಳು ಯಶಸ್ವಿಯಾಗುತ್ತವೋ ಇಲ್ಲವೋ,ನಮ್ಮ ದೇಶದ ಆರ್ಥಿಕ ನೀತಿಗಳ ಇತಿಹಾಸದಲ್ಲಿ ಇವುಗಳ ರಚನೆ ಒಂದು ದೊಡ್ಡ ಮೈಲಿಗಲ್ಲಾಗಲಿದೆ.  read more »

ಕೃಷಿಯಲ್ಲಿ ಜೈವಿಕ ವೈವಿಧ್ಯತೆ

ಜೈವಿಕ ವೈವಿಧ್ಯತೆ (Biodiversity) ಅಭಿವೃದ್ಧಿಗೆ ಸಂಬಂಧಿಸಿದ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಬಹಳ ಉಪಯೋಗಿತವಾದ ಪದಪುಂಜ. ಒಂದು ಸೀಮಿತ ಪ್ರದೇಶದಲ್ಲಿರುವ ಜೀವಿಗಳ ವಿವಿಧತೆಯನ್ನು ಸೂಚಿಸುವ ಪದವೇ ಜೈವಿಕ ವೈವಿಧ್ಯತೆ. ಪ್ರಕೃತಿಯಲ್ಲಿ ನೈಸರ್ಗಿಕವಾದ ಸಮತೋಲನವನ್ನು ಕಾಪಾಡುವುದಕ್ಕೆ ಜೈವಿಕ ವೈವಿಧ್ಯತೆ ಬಹಳ ಅವಶ್ಯಕ. ಜಾಗತಿಕ ಮಟ್ಟದಲ್ಲಿ ನಾನಾಕಾರಣಗಳಿಂದ ಸಸ್ಯ-ಪ್ರಾಣಿಗಳ ವಿವಿಧತೆ ಕಡಿಮೆಯಾಗುತ್ತಿರುವುದು ಒಂದು ದೊಡ್ಡ ದುರಂತವೆಂದು, ಈ ವೈವಿಧ್ಯತೆಯನ್ನು ಉಳಿಸಲು, ಬೆಳೆಸಲು ಯೂನೈಟೆಡ್ ನೇಶನ್ಸ್ ನ Commission for Biodiversity (CBD)ಯನ್ನು ಸೇರಿದಂತೆ ಹಲವಾರು ಹೊಸ ಕಾರ್ಯಕ್ರಮಗಳು, ಒಪ್ಪಂದಗಳೂ (WTO ನಂತೆಯೇ) ನಾನಾ ಅಭಿವೃದ್ಧಿ ಸಂಸ್ಥೆಗಳಲ್ಲಿ ಶುರುವಾಗಿದೆ. ಇದೇ ವೈವಿಧ್ಯತೆ ಕೃಷಿ ಸಂಬಂಧಿತ ಪ್ರದೇಶಕ್ಕೆ ಸೀಮಿತವಾದಾಗ ಅದನ್ನು ಕೃಷಿ ಜೈವಿಕ ವೈವಿಧ್ಯತೆಯೆಂದು ಕರೆಯಬಹುದು.  read more »

ಕೃಷಿಯಲ್ಲಿ ಉದಾರೀಕರಣ - ಒಂದು ಕೈಪಿಡಿ

ಇಂದಿನ ಕೃಷಿಯಲ್ಲಿನ ಸಮಸ್ಯೆಗಳು ಉಲ್ಬಣಿಸಲು ರಾಜ್ಯ, ರಾಷ್ಟ್ರದ ಕೃಷಿನೀತಿಯ ಬಗ್ಗೆ ಸಾಮಾನ್ಯ ಜನರಿಗಿರುವ ಗೊಂದಲಗಳೂ, ಅವುಗಳನ್ನು ನಾನಾರೀತಿಯಲ್ಲಿ ದುರುಪಯೋಗಪಡಿಸಿಕೊಳ್ಳುವ ಜನರೂ ಒಂದು ರೀತಿಯ ಕಾರಣವೆನ್ನಬಹುದು. ಉದಾರೀಕರಣದ ಪಥದಲ್ಲಿರುವ ಸಾಗಿರುವ ದೇಶದ ಆರ್ಥಿಕ ನೀತಿಗಳು, ಹಾಗು ಇವುಗಳಿಂದ ಕರ್ನಾಟಕದ ಕೃಷಿಯ ಮೇಲಿನ ಪರಿಣಾಮಗಳನ್ನು ಬೆಂಗಳೂರಿನ ISEC ಸಂಸ್ಥೆಯ ಡಾಕ್ಟರ್ ಆರ್. ಎಸ್ ದೇಶಪಾಂಡೆ ಮತ್ತು ಜೆ. ಪ್ರಚಿತರವರು "WTO and Agricultural Policy in Karnataka" ಎಂಬ ವರದಿಯಲ್ಲಿ ಸವಿವರವಾಗಿ ತಿಳಿಸಿದ್ದಾರೆ. ಈ ಲೇಖನ, ಈ ವರದಿಯ ಹಲವು ವಿಷಯಗಳನ್ನು ಬಳಸಿಕೊಂಡಿದೆ.

WTO  read more »

ಕೃಷಿಯಲ್ಲಿ ಸುಸ್ಥಿರತೆ

ಬಳಲಿರುವ ರೈತನಿಗಿಂದು ಸಹಾಯಹಸ್ತ ನೀಡಲು ಹಲವಾರು ಜನ ತಯಾರಿದ್ದಾರೆ. ಕೃಷಿಗಾಗಿಯೇ ವಿಶ್ವವಿದ್ಯಾಲಯಗಳು, ಮಾಹಿತಿ ಕೇಂದ್ರಗಳು, ಸರ್ಕಾರದ ವಿವಿಧ ಯೋಜನೆಗಳು, ಸಾಲಗಳು, ವಿನಾಯತಿಗಳು, ವಿಮೆಗಳು, ಹಲವು ಹೊಸ-ಹಳೆ ಬೇಸಾಯ ಪದ್ಧತಿಗಳು, ಹೊಸ ರಾಸಾಯನಿಕಗಳು, ಗೊಬ್ಬರಗಳು, ಹೊಸ ಬಗೆಯ ಬೆಳೆಗಳು, ಬೀಜಗಳು, ಹೊಸ ನೀರಾವರಿ ತಂತ್ರಜ್ಞಾನಗಳು, ಹೊಸ ರೀತಿಯ ಖಾಸಗಿ ಒಡಂಬಡಿಕೆಗಳು. ಹೀಗೆ ಒಂದೇ ಎರಡೇ..ಲೆಕ್ಕವಿಲ್ಲದಷ್ಟು ಕೈಗಳು, ಸಹಾಯ ಮಾಡುವುದಕ್ಕೆ. ಇವನ್ನೆಲ್ಲ ನೋಡಿದರೆ ನಮ್ಮ ರೈತಾಪಿ ಜನಕ್ಕಿರುವಷ್ಟು ಬೆಂಬಲ ಸಮಾಜದ ಯಾವುದೇ ವರ್ಗದ ಜನರಿಗೂ ಇಲ್ಲವೆಂದು ಕೆಲವೊಮ್ಮೆ ಹೊಟ್ಟೆಕಿಚ್ಚೇ ಆಗಬಹುದು ದೂರದಿಂದ ನೋಡಿದವರಿಗೆ.

ಆದರೆ ವಾಸ್ತವ ಎಷ್ಟು 'ಅವಾಸ್ತವ'! ಇಷ್ಟೆಲ್ಲ ಇದ್ದೂ ಇಂದು ರೈತ ತೊಂದರೆ, ಹತಾಶೆಗೊಳಗಾಗಿದ್ದಾನೆಂದರೆ ನಂಬಲು ಸಾಧ್ಯವೇ ? ಅಥವ, ಅವನ ಕಷ್ಟಕಾರ್ಪಣ್ಯಗಳೆಷ್ಟಿವೆಯೆಂದರೆ ಇಷ್ಟೆಲ್ಲ ಇದ್ದೂ ಅವನ ತೊಂದರೆಗಳು ದೂರವಾಗದೆಯೆ ಇರಬಹುದೆ ? ಅಥವ ಮೇಲೆನ ಬಹಳಷ್ಟು ಉದಾಹರಣೆಗಳು ಬೊಗಳೆಯೇ, ದುರುದ್ದೇಶದಿಂದ ಕೂಡಿದ ಷಡ್ಯಂತ್ರಗಳೇ?  read more »

Syndicate content